ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಯಾವುದೇ ಕಾಲೇಜಿನ ಕ್ರಿಯಾಶೀಲತೆಯ ಸಂಕೇತ ಅಲ್ಲಿರುವ ಎನ್‌ಎನ್‌ಎಸ್ ಘಟಕ: ಡಾ. ಅರುಣ್

Share Below Link

ಶಿವಮೊಗ್ಗ: ಎನ್‌ಎಸ್‌ಎಸ್ ಬದುಕುವುದನ್ನು ಕಲಿಸುವ ಒಂದು ಅತ್ಯುತ್ತಮ ವೇದಿಕೆ. ಶಿಸ್ತು, ಸರಳತೆ, ಸಮಯಪಾಲನೆ, ಕ್ರಿಯಾಶೀಲತೆ ಇವೆಲ್ಲವೂ ನಮ್ಮ ಬದುಕಿಗೆ ಹೇಳಿಕೊಡುವ ರಾಷ್ಟ್ರೀಯ ಸೇವಾ ಯೋಜನೆ ನಿಜಕ್ಕೂ ದೇಶದಕ್ಕೆ ಸಂಪನ್ಮೂಲವಿದ್ದಂತೆ. ಈ ದೇಶದ ಸತ್ಪ್ರಜೆಗಳನ್ನು ನಿರ್ಮಾಣ ಮಾಡುವ ಬಹುದೊಡ್ಡ ಹೊಣೆಗಾರಿಕೆಯನ್ನು ಅದು ನಿರ್ವಹಿಸುತ್ತಿದೆ. ಸಾಂಸ್ಕೃತಿಕ ವಾಗಿಯೂ ನಮ್ಮನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಎನ್‌ಎಸ್ ಎಸ್ ಮುಖ್ಯ ಕಾರಣ. ಅದು ಯಾವುದೇ ಕಾಲೇಜಿನ ಕ್ರಿಯಾಶೀಲತೆಯ ಸಂಕೇತ ಎಂದು ಬೆಂಗಳೂರಿನ ನೈಋತ್ಯ ಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಎನ್‌ಎಸ್ ಎಸ್ ಸ್ವಯಂ ಸೇವಕರೂ ಅದ ಡಾ| ಅರುಣ್ ಹೊಸಕೊಪ್ಪ ಅವರು ನುಡಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆಜದಿ ಕ ಅಮೃತ್ ಮಹೋತ್ಸವ, ಕನ್ನಡ ನುಡಿ ಮಂಟಪ ಹಾಗೂ ೨೦೨೨-೨೩ನೇ ಸಾಲಿನ ಎನ್. ಎಸ್ ಎಸ್. ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.


ಎನ್‌ಎಸ್‌ಎಸ್ ಸಂಯೋಜ ನಾಧಿಕಾರಿ ಡಾ| ಪರಿಸರ ನಾಗರಾಜ್ ಅವರು ಮಾತನಾಡಿ, ಪರಿಸರ ಉಳಿಸುವ ಆಂದೋಲನ ನಮ್ಮ ಆದ್ಯತೆಯಾಗಬೇಕು. ಪ್ಲಾಸ್ಟಿಕ್ ವಿರೋಧಿ ಧೋರಣೆ ಇಲ್ಲಿಂದಲೇ ಆರಂಭವಾಗಬೇಕು ಎಂದರು.
ಪ್ರಾಧ್ಯಾಪಕರಾದ ಡಾ| ಕುಂದನ್ ಬಸವರಾಜ, ಡಾ| ಗಿರಿಧರ್ ಕೆ. ವಿ, ಡಾ| ಶಿವಮೂರ್ತಿ ಎ., ಪರಶುರಾಮ ಎಂ. ಅವರುಗಳು ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ಕೆ. ವೀಣಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದ್ವೇಷ ಅಸೂಯೆಗಳಿಲ್ಲದ ಸ್ನೇಹ ಪೂರ್ಣ, ಸೃಜಶೀಲ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳ ಬೇಕು. ಕಾಲೇಜು ಅಂದರೆ ಬರಿ ಕಟ್ಟಡ ಮಾತ್ರ ಅಲ್ಲ. ಅಲ್ಲಿನ ಚೇತನಗಳೆಂದರೆ ವಿದ್ಯಾರ್ಥಿಗಳು. ಪ್ರತಿಭಾವಂತ ಯುವ ಸಮೂಹ ದಿಂದ ಯಾವುದೇ ಕಾಲೇಜು ಶೋಭಿಸುತ್ತದೆ ಎಂದರು.
ಆಜದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳು ಜನಪದ ನೃತ್ಯ ಕಾರ್ಯಕ್ರಮ ನಡೆಸಿಕೊ ಟ್ಟರು. ಎನ್.ಎಸ್.ಎಸ್. ಸಾಧಕ ರಾದ ಮಾಲತೇಶ್ ಎಚ್., ಕೌಶಿಕ್ ಇವರನ್ನು ಸನ್ಮಾನಿಸಲಾ ಯಿತು. ಸ್ವರೂಪ್ ಸಿದ್ಧಾರೂಢ ಕು. ನಿರೀಕ್ಷಾ ಕು. ಇಳಾ ಉಪಸ್ಥಿತ ರಿದ್ದರು. ಡಾ| ಶುಭಾ ಮರವಂತೆ ಪ್ರಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಅರ್ಪಿತ ಹಾಗೂ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.