ಆರೋಗ್ಯಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಇಂದು ರಕ್ತದಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ: ಸುರೇಖಾ

Share Below Link

ಶಿವಮೊಗ್ಗ: ಜನಸಂಖ್ಯೆ ಹೆಚ್ಚಾ ದಂತೆ, ಅಪಘಾತಗಳು, ಅನಾ ರೋಗ್ಯ ಸಮಸ್ಯೆಗಳು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಉಂಟಾಗುತ್ತಿದೆ ಎಂದು ಶಿವಮೊಗ್ಗ ಭಾವನಾ ಹಾಗೂ ಸೀನಿಯರ್ ಚೇಂಬರ್ ಅಧ್ಯಕ್ಷೆ ಸುರೇಖಾ ಮುರುಳೀಧರ್ ಹೇಳಿದರು.
ಅವರು ಇಂದು ರೆಡ್ ಕ್ರಾಸ್ ರಕ್ತ ಸಂಜೀವಿನಿ ಬ್ಲಡ್ ಬ್ಯಾಂಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವರಕ್ತದಾನಿ ಗಳ ದಿನವನ್ನು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ದರು.
ಎಲ್ಲಾ ದಾನಗಳಿಗಿಂತ ಇಂದು ರಕ್ತದಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ರಕ್ತದ ಕೊರತೆ ತೀವ್ರ ವಾಗಿ ಹೆಚ್ಚುತ್ತಿದ್ದು, ಜೀವಕ್ಕೆ ಜೀವ ಕೊಡುವ ರಕ್ತವನ್ನು ಮಹಿಳೆಯರು ಕೊಡಬಹುದು ಎಂದು ತೋರಿ ಸಿಕೊಟ್ಟು ಜನಸಾಮಾನ್ಯರಿಗೆ ಮಾರ್ಗ ದರ್ಶಕರಾಗಿರುವ ಮಹಿ ಳೆಯರನ್ನು ಇಂದು ಗುರ್ತಿಸಿ ಗೌರ ವಿಸಲಾಗಿದೆ. ಇದನ್ನು ಇಂದಿನ ಯುವತಿಯರು ಗಮನಿಸಿ, ರಕ್ತ ದಾನಕ್ಕೆ ಮುಂಚೂಣಿಗೆ ಬರಬೇಕೆಂ ದರು.
ಸನ್ಮಾನಿತರ ಪರವಾಗಿ ಮಾತನಾಡಿದ ಪ್ರೊ.ಡಾ.ಅಶ್ವಿನಿ ಗಂಡಸರಿಗೆ ಸರಿ ಸಮನಾಗಿ ಇಂದಿನ ಮಹಿಳೆಯರು ಸ್ವರ್ಧಾಕಣದಲ್ಲಿ ಇದ್ದು ರಕ್ತದಾನದಲ್ಲಿ ಮಾತ್ರ ಸ್ವಲ್ಪ ಹಿಂದುಳಿದಿದ್ದಾರೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಮತ್ತು ಹೊಸ ಚೈತನ್ಯ ದೊರಕುತ್ತದೆ. ಯುವತಿಯರು ರಕ್ತದಾನ ಮಾಡುವ ಮೂಲಕ ಕೊರತೆಯನ್ನು ನೀಗಿಸಬೇಕೆಂದರು.
ಪ್ರಾಸ್ತಾವಿಕವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಮಂಜುನಾಥ್ ಮಾತನಾಡಿದರು. ಸಭೆಯಲ್ಲಿ ಎಂ.ಸುರೇಶ್, ಆರ್.ಗಿರೀಶ್, ಕೆ.ಸಿ.ಬಸವರಾಜ್ ಭಾವನಾ ಜೇಸಿಯ ಸದಸ್ಯೆಯರು ಇದ್ದರು. ಧರಣೇಂದ್ರ ದಿನಕರ್ ಸ್ವಾಗತಿಸಿ, ಜಿ.ವಿಜಯಕುಮಾರ್ ನಿರೂಪಿಸಿ, ಲಕ್ಷ್ಮೀರುದ್ರೇಶ್ ವಂದಿಸಿದರು.