ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ರಸ್ತೆ ಸುಗಮ ಸಂಚಾರಕ್ಕಾಗಿ ನಾಲ್ಕು ದ್ವಿಚಕ್ರ ವಾಹನಗಳ ಸೇವೆ ಆರಂಭ

Share Below Link

ಶಿವಮೊಗ್ಗ : ನಗರದಲ್ಲಿ ಸುಗಮ ರಸ್ತೆ ಸಂಚಾರಕ್ಕಾಗಿ ನಾಲ್ಕು ಬೈಕ್ ಗಳ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ನಾಲ್ಕು ದ್ವಿ ಚಕ್ರವಾಹನಗಳನ್ನ ಸಂಚಾರಿ ಪೊಲೀಸ್ ಠಾಣೆಗಳಿಗೆ ನೀಡಲಾ ಗಿದೆ. ಜಿ ರಕ್ಷಣಾಧಿಕಾರಿಗಳಿಂದ ಈ ನಾಲ್ಕು ದ್ವಿಚಕ್ರ ವಾಹನಗಳ ಸೇವೆ ಆರಂಭಕ್ಕೆ ಇಂದು ಬಸ್ ನಿಲ್ದಾಣದ ಬಳಿ ಹಸಿರು ನಿಶಾನೆ ತೋರಲಾಗಿದೆ.
ನಗರದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ವಾಹನ ದಟ್ಟಣೆಯಿಂದ ಹಲವೆಡೆ ತೊಂದರೆ ಉಂಟಾಗಿದ್ದು ಇವುಗಳ ಸಂಚಾರ ವನ್ನ ಸುಗಮಗೊಳಿಸಲು ಈ ದ್ವಿಚಕ್ರ ವಾಹನ ಅನುಕೂಲವಾ ಗಲಿದೆ.
ಜಿ ಹೆಚ್ಚು ರಕ್ಷಣಾಧಿಕಾರಿ ಅಮಿಲ್ ಕುಮಾರ್ ಭೂಮರಡ್ಡಿ ಅವರ ನೇತೃತ್ವದಲ್ಲಿ ನಗರದಲ್ಲಿ ಶಾಲಾ ಕಾಲಾಜಲೇಜುಗಳು ಬಿಡು ವಾಗ ಮತ್ತು ಆರಂಭವಾಗುವಾಗ ವಾಹನ ದಟ್ಟಣೆ ಜಗವನ್ನ ಗುರು ತಿಸಿ ಅಲ್ಲಿ ಸುಗಮ ವಾಹನ ಸಂಚಾ ರಕ್ಕೆ ಈ ದ್ವಿಚಕ್ರ ವಾಹನ ಅನುಕೂಲ ವಾಗಲಿದೆ.

ಈ ದ್ವಿಚಕ್ರ ವಾಹನದಲ್ಲಿ ಮತ್ ಪೀಸು ಇದೆ. ಫಸ್ಟ್ ಏಡ್ ಬಾಕ್ಸ್ ಸಹ ಅಳವಡಿಸಲಾಗಿದೆ. ಜನಸಂದಣಿಯಾದಲ್ಲಿ ಸೈರನ್ ಹಾಕಿ ರಸ್ತೆ ಸುಗಮಗೊಳಿಸುವುದು ಈ ವಾಹನದ ಮುಖ್ಯ ಉದ್ದೇಶ ವಾಗಿದೆ, ಒಂದು ವೇಳೆ ಅಪಘಾತ ಸಂಭವಿಸಿದ್ದಲ್ಲಿ ಸಾರ್ವಜನಿಕರು ೧೧೨ ಅಥವಾ ಸಂಚಾರಿ ಪೊಲೀಸ್ ಠಾಣೆಗೆ ಕರೆ ಮಾಡಬಹುದಾಗಿ.
ಎರಡು ಟ್ರಾಫಿಕ್ ಠಾಣೆಗಳಲ್ಲಿ ತಲಾ ನಾಲ್ಕು ಪೊಲೀಸ್ ಸಿಬ್ವಂದಿ ಗಳಿಗೆ ಒಂದು ವಾಹನಕ್ಕೆ ತರಬೇತಿ ನೀಡಲಾಗಿದೆ. ಏಕಮುಖ ರಸ್ರೆ, ಅನೌನ್ಸ್ ಮೆಂಟ್ ಮೂಲಕ ರಸ್ತೆ ಸಂಚಾರದ ಬಗ್ಗೆ ಜನರಲ್ಲಿ ಜಗೃತಿ ಮೂಡಿಸಲಾಗುತ್ತಿದೆ ಐದಾರು ಪಾಯಿಂಟ್ಸ್ ಗಳನ್ನ ಇಲಾಖೆ ಗುರಿತಿಸಿದ್ದು ಅಲ್ಲಿ ಸಂಚಾರಿ ನಿಯಮ ಪಾಲನೆಗೆ ಈ ವಾಹನ ಸಹಕಾರವಾಗಲಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್ಪಿ ಮಿಥುನ್ ಕುಮಾರ್ ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಇದನ್ನ ಸುಗಮಗೊ ಳಿಸಲು ಸ್ಮಾರ್ಟ್ ಸಿಟಿಯಿಂದ ನಾಲ್ಕು ವಾಹನ ನೀಡಲಾಗಿದೆ. ರಸ್ತೆ ಸುಗಮ ಸಂಚಾರಕ್ಕೆ ಇವು ಅನುಕೂಲವಾಗಲಿದೆ ಎಂದರು.