ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಮೂತ್ರಪಿಂಡದ ಕಾಯಿಲೆ; ಒಂದು ನಿಶಬ್ದ ಹಂತಕ : ಮುಂಚಿತವಾಗಿ ಪತ್ತೆಹಚ್ಚುವುದೇ ಅತ್ಯುತ್ತಮ ರಕ್ಷಣೆ…

Share Below Link

ಮಾ.೧೨ರ ಇಂದು ವಿಶ್ವ ಮೂತ್ರಪಿಂಡ ದಿನ. ಈ ನಿಮಿತ್ತ ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಮೂತ್ರಪಿಂಡ ತಜ್ಞವೈದ್ಯರಾದ ಡಾ| ಮೊಹಮ್ಮದ್ ಇಮ್ರಾನ್ ಮತ್ತು ಡಾ| ರವಿ ಕೆ.ಆರ್. ಅವರು ಮೂತ್ರಪಿಂಡ ಖಾಯಿಲೆ ಕುರಿತು ಬರೆದ ವಿಶೇಷ ಲೇಖನ ಹೊಸನಾವಿಕ ಓದುಗರಿಗಾಗಿ…
ಶಿವಮೊಗ್ಗ: ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಾ ಗಿದ್ದು, ನಮ್ಮನ್ನು ಆರೋಗ್ಯವಾಗಿಡಲು ಹಲವು ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತವೆ. ರಕ್ತದಲ್ಲಿನ ಕಲ್ಮಶಗಳನ್ನು (ಟಾಕ್ಸಿನ್) ಮತ್ತು ಹೆಚ್ಚುವರಿ ನೀರನ್ನು ಹೊರಹಾಕುವುದು ಇದರ ಮುಖ್ಯ ಕೆಲಸವಾಗಿದೆ. ಅಲ್ಲದೆ, ರಕ್ತದೊತ್ತಡ ವನ್ನು ನಿಯಂತ್ರಿಸಲು, ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ಮತ್ತು ಮೂಳೆಗಳ ಆರೋಗ್ಯವನ್ನು ವೃದ್ಧಿಸಲು ಇದು ಸಹಾಯ ಮಾಡುತ್ತದೆ.
ಮೂತ್ರಪಿಂಡದ ಕಾಯಿಲೆಯನ್ನು ನಿಶಬ್ದ ಹಂತಕ (ಸೈಲೆಂಟ್ ಕಿಲ್ಲರ್) ಎಂದು ಕರೆಯಲು ಒಂದು ಕಾರಣವಿದೆ. ಮೂತ್ರಪಿಂಡದ ಕಾಯಿಲೆ ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ರೋಗವು ತೀವ್ರ ಹಂತಕ್ಕೆ ತಲುಪಿದಾಗ ಮಾತ್ರ ಲಕ್ಷಣ ಗೋಚರಿಸುತ್ತವೆ.
ಸಾಮಾನ್ಯ ಜನರಲ್ಲಿ ಮೂತ್ರ ಪಿಂಡದ ಕಾಯಿಲೆಯ ಬಗ್ಗೆ ಇರುವ ಅರಿವು ಶೇ.೧೦ಕ್ಕಿಂತ ಕಡಿಮೆಯಿದೆ. ಶೇ.೮೦ ರಿಂದ ೯೦ರಷ್ಟು ಮೂತ್ರ ಪಿಂಡಗಳು ಹಾನಿಗೊಳ ಗಾದಾಗ ಮಾತ್ರವೇ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.


ಉಲ್ಬಣಗೊಂಡ ಮೂತ್ರ ಪಿಂಡ ಕಾಯಿಲೆಯ ಪ್ರಮುಖ ಲಕ್ಷಣಗಳು:
ಕಾಲುಗಳಲ್ಲಿ ಊತ/ಮುಖ ಊದಿ ಕೊಳ್ಳುವುದು, ಉಸಿರಾಡಲು ತೊಂದರೆ, ವಿಪರೀತ ಸುಸ್ತು ಅಥವಾ ಆಯಾಸ, ಹಸಿವು ಕಡಿಮೆಯಾಗುವುದು, ಸ್ನಾಯು ಸೆಳೆತ (ಮಸಲ್ ಕ್ರ್ಯಾಂಪ್ಸ್), ಚರ್ಮದಲ್ಲಿ ತುರಿಕೆ, ಮೂತ್ರದಲ್ಲಿ ನೊರೆ ಬರುವುದು, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಅತಿ ಹೆಚ್ಚಿನ ರಕ್ತದೊತ್ತಡ.
ಮೂತ್ರಪಿಂಡದ ಕಾಯಿಲೆ ಯಾರಿಗೆಲ್ಲ ಬರುವ ಸಾಧ್ಯತೆಯಿದೆ?
ಇದರ ಅಪಾಯಕಾರಿ ಅಂಶಗಳು ಹೀಗಿವೆ:
೧.ಅಧಿಕ ರಕ್ತದೊತ್ತಡ (ಹೈ ಬಿಪಿ)
೨.ಮಧುಮೇಹ ಪ್ರಪಂಚದಾದ್ಯಂತ ಇದು ಅತಿ ಸಾಮಾನ್ಯ ಕಾರಣವಾಗಿದೆ.
೩.ಬೊಜ್ಜು (ಸ್ಥೂಲಕಾಯ)
೪.ಮೂತ್ರ ಪಿಂಡಗಳ ಸೋಂಕು (ಪೈಲೊನೆಫ್ರೈಟಿಸ್)
೫.ನೋವು ನಿವಾರಕ ಮಾತ್ರೆಗಳ (ಪೇನ್ ಕಿಲ್ಲರ್ಸ್) ಮತ್ತು ಗ್ಯಾಸ್ಟ್ರಿಕ್ ಮಾತ್ರೆಗಳ (ಆಂಟಾಸಿಡ್) ಅತಿಯಾದ ಬಳಕೆ.
೬.ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಸಮಸ್ಯೆಯನ್ನು ನಿರ್ಲಕ್ಷಿಸುವುದು.
೭.ಗ್ಲೋಮೆರುಲೋನೆಫ್ರೈಟಿಸ್ (ಮೂತ್ರ ಪಿಂಡದ ಫಿಲ್ಟರ್‌ಗಳ ಉರಿಯೂತ.
ನಮ್ಮ ದೇಶದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ ಅತಿಯಾದ ಹೃದಯದ ಒತ್ತಡ, ದೀರ್ಘಕಾಲದ ನಿರ್ಜಲೀಕರಣ (ದೇಹದಲ್ಲಿ ನೀರಿನಂಶ ಕಡಿಮೆಯಾಗು ವುದು), ವಿಪರೀತ ಆಹಾರ ಸೇವನೆ ಮತ್ತು ಕೀಟನಾಶಕಗಳ ಪ್ರಭಾವ.
ಮೂತ್ರಪಿಂಡದ ಕಾಯಿಲೆಯನ್ನು
ಪತ್ತೆ ಹಚ್ಚುವುದು ಹೇಗೆ?
ಸಂಪೂರ್ಣ ಮೂತ್ರ ಪರೀಕ್ಷೆಯಂತಹ ಸರಳ ಪರೀಕ್ಷೆಗಳ ಮೂಲಕ ಸೋಂಕು, ಮೂತ್ರ ದಲ್ಲಿ ರಕ್ತ ಅಥವಾ ಪ್ರೋಟೀನ್ ಸೋರಿಕೆ ಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸ ಲಾಗುತ್ತದೆ. ರಕ್ತ ಪರೀಕ್ಷೆಯಲ್ಲಿ ಸಿರಮ್ ಕ್ರಿಯೇಟಿನೈನ್ ಮಟ್ಟವನ್ನು ಅಳೆಯಲಾಗು ತ್ತದೆ. ಇದರ ಮೂಲಕ ಮೂತ್ರಪಿಂಡಗಳು ಎಷ್ಟು ಶೇಕಡಾ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಲೆಕ್ಕಹಾಕಲಾಗುತ್ತದೆ.
ಮೂತ್ರದಲ್ಲಿ ಪ್ರೋಟೀನ್ ಸೋರಿಕೆ ಯಾಗುತ್ತಿರುವ ಕೆಲವು ಸಂದರ್ಭಗಳಲ್ಲಿ, ಕಿಡ್ನಿ ಬಯಾಪ್ಸಿ ಮಾಡಿಸಿಕೊಳ್ಳಲು ಸಲಹೆ ನೀಡಲಾ ಗುತ್ತದೆ. ಕಿಡ್ನಿಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೂಡ ಅಗತ್ಯವಿರುತ್ತದೆ.
ಮೂತ್ರಪಿಂಡಗಳು ಹಾನಿಗೊಳಗಾಗದಂತೆ ನಾವು ತಡೆಯಬಹುದೇ?
ಹೌದು, ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನಾವು ಇದನ್ನು ತಡೆಯಬಹುದು:
೧.ದೈಹಿಕವಾಗಿ ಫಿಟ್ ಆಗಿರಿ ಮತ್ತು ಚಟುವಟಿಕೆಯಿಂದಿರಿ.
೨.ಆರೋಗ್ಯಕರ ಆಹಾರವನ್ನು ಸೇವಿಸಿ – ದಿನಕ್ಕೆ ೫ ಗ್ರಾಂ ಗಿಂತ ಕಡಿಮೆ ಉಪ್ಪನ್ನು ಬಳಸಿ.
೩.ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿ ಕೊಂಡು ೧೪೦/೯೦ಞಞಏಜಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ ಮತ್ತು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಶೇ.೭ಕ್ಕಿಂತ ಕಡಿಮೆ ಇಟ್ಟುಕೊಳ್ಳಿ.
೪.ಸೂಕ್ತ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಿ – ದೇಹದಲ್ಲಿ ನೀರಿನಂಶ ಕಾಪಾಡಿ ಕೊಳ್ಳಲು ದಿನಕ್ಕೆ ಕನಿಷ್ಠ ೨ ಲೀಟರ್ ನೀರು ಕುಡಿಯಿರಿ.
೫.ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ. ವೈದ್ಯರ ಚೀಟಿ ಇಲ್ಲದೆ ಸಿಗುವ ನೋವು ನಿವಾರಕ ಮಾತ್ರೆಗಳನ್ನು ಪದೇ ಪದೇ ತೆಗೆದುಕೊಳ್ಳಬೇಡಿ.
೭.ನಿಮಗೆ ಮಧುಮೇಹ, ಅಧಿಕ ರಕ್ತ ದೊತ್ತಡ, ವಯಸ್ಸು ೪೦ ವರ್ಷಕ್ಕಿಂತ ಮೇಲ್ಪ ಟ್ಟಿದ್ದರೆ, ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮೂತ್ರಪಿಂಡದ ಕಾಯಿಲೆ ಇದ್ದರೆ, ದಯವಿಟ್ಟು ನಿಮ್ಮ ಕಿಡ್ನಿ ಕಾರ್ಯ ಕ್ಷಮತೆಯನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.
ಈ ವರ್ಷದ ವಿಶ್ವ ಮೂತ್ರಪಿಂಡ
ದಿನದ ಧ್ಯೇಯವಾಕ್ಯ:
ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ- ಜನರ ಕಾಳಜಿ, ಭೂಮಿಯ ರಕ್ಷಣೆ.
ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ಹೇಗೆ?
ಆರಂಭಿಕ ಹಂತದಲ್ಲಿ, ಅಇಉಐ/ಅಆಐನಂತಹ ಹಲವು ಔಷಧಿಗಳು ಮೂತ್ರಪಿಂಡದ ಕಾಯಿಲೆ ಉಲ್ಬಣಗೊಳ್ಳುವುದನ್ನು ತಡೆಯಬಲ್ಲವು.
ಮೂತ್ರಪಿಂಡದ ಕಾಯಿಲೆಯು ಕೊನೆಯ ಹಂತದಂತಹ ಮುಂದುವರಿದ ಹಂತಗಳಿಗೆ ತಲುಪಿ ದಾಗ, ಚಿಕಿತ್ಸಾ ಆಯ್ಕೆಗಳು ಸೀಮಿತವಾಗುತ್ತವೆ. ಆಗ ಡಯಾಲಿಸಿಸ್ ಅಥವಾ ಕಿಡ್ನಿ ಕಸಿಗೆ ಒಳಗಾಗಬೇಕಾಗುತ್ತದೆ.
ಸೂಕ್ತ ರೋಗಿಗಳಿಗೆ ಕಿಡ್ನಿ ಕಸಿ ಮಾಡುವುದು ಅತ್ಯುತ್ತಮ ಚಿಕಿತ್ಸೆಯಾಗಿದೆ ಮತ್ತು ಇದು ಡಯಾಲಿಸಿಸ್‌ಗಿಂತ ಹೆಚ್ಚು ಪ್ರಯೋಜನ ಗಳನ್ನು ಹೊಂದಿದೆ.
ಕಿಡ್ನಿ ತೊಂದರೆಗಳು ಹೆಚ್ಚಾಗುತ್ತಿರುವ ಕಾರಣವೇನು?
ಪ್ರಪಂಚದಾದ್ಯಂತ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣವೆಂದರೆ ಮಧು ಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿ ರುವುದು. ಅಲ್ಲದೆ ಆಧುನಿಕ ಜೀವನಶೈಲಿ ಯಿಂದ ಉಂಟಾಗಿರುವ ಸ್ಥೂಲಕಾಯ ಧೂಮಪಾನ ಆರೋಗ್ಯಕ್ಕೆ ಪೂರಕವಲ್ಲದ ಆಹಾರ ಸೇವನೆ ಹಾಗೂ ವ್ಯಾಯಾಮವಿಲ್ಲದ ಜೀವನ ಶೈಲಿ ಕಾರಣವಾಗಿದೆ.
ಭಾರತದಲ್ಲಿನ ಅಂಕಿ ಅಂಶಗಳ ಪ್ರಕಾರ ೬೦ ರಿಂದ ಶೇ.೭೦ ಕಿಡ್ನಿ ವೈಫಲ್ಯತೆ ಉಂಟಾಗುವುದು ಡಯಾಬಿಟಿಸ್ ಹಾಗೂ ಬಿಪಿ ಕಾಯಿಲೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳೇ ಕಾರಣ. ಕಿಡ್ನಿ ತೊಂದರೆ ತಡೆಗಟ್ಟ ಬೇಕಾದಲ್ಲಿ ಈ ವರ್ಗದ ಜನರಿಗೆ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸಿ, ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಕಿಡ್ನಿ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹೆಚ್ಚಿನ ನೀರು ಸೇವನೆ ಮಾಡಬೇಕು. (ದಿನಕ್ಕೆ ಎರಡು ಲೀಟರ್) ಆಹಾರದಲ್ಲಿನ ಉಪ್ಪಿನ ಪ್ರಮಾಣ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ವೈದ್ಯರೊಂದಿಗೆ ತಪಾಸಣೆ ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ. ಸೌಂದರ್ಯ ವರ್ಧಕ ವಸ್ತುಗಳು ಮುಂತಾದವುಗಳಲ್ಲಿ ಕಿಡ್ನಿಗೆ ಹಾನಿ ಮಾಡಬಹುದಾದ ರಾಸಾಯನಿಕ ವಸ್ತುಗಳು ಇರಬಹುದು. ಆದ್ದರಿಂದ ಇಂತಹ ವಸ್ತುಗಳಿಂದ ದೂರ ಇರಬೇಕು ಹಾಗೂ ತಜ್ಞರ ನಿರ್ದೇಶನವಿಲ್ಲದೆ ಆನ್‌ಲೈನ್ ಪ್ರಾಡಕ್ಟ್‌ಗೆ ಮೊರೆ ಹೋಗಬೇಡಿ. ಪ್ರಕೃತಿದತ್ತವಾದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

Leave a Reply

Your email address will not be published. Required fields are marked *