ಸಿಗಂದೂರು ಸೇತುವೆ: ಕಾರ್ಮಿಕರಿಗೆ ಒಕ್ಕೂಟದಿಂದ ಆತ್ಮೀಯ ಸನ್ಮಾನ
ಶಿವಮೊಗ್ಗ : ದೇಶದಲ್ಲಿಯೇ ಎರಡನೇ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿದ್ದು, ಸೇತುವೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ, ಕಳೆದ ಐದು ವರ್ಷಗಳಿಂದ ಹಗಲಿರುಳು ಕರ್ತವ್ಯ ನಿರ್ವಹಿಸಿದ ಕಾರ್ಮಿಕರಿಗೆ ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘಟನೆ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಮಿಕರಿಗೆ ಶಾಲು ಹೊದಿಸಿ, ಹೂವಿನ ಮಾಲೆ ಹಾಕಿ ಅಭಿನಂದಿಸಲಾಯಿತು. ಜೊತೆಗೆ ಊಟದ ಬಾಕ್ಸ್, ಕುಡಿಯುವ ನೀರಿನ ಬಾಟಲಿ ಉಡುಗೊರೆ ಯಾಗಿ ನೀಡಲಾಯಿತು.
ಸಂಘಟನೆಯ ಜಿಧ್ಯಕ್ಷ ಕೆ ಸಂಜಯ್ ಕುಮಾರ್, ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಧ್ಯಕ್ಷೆ ಕವಿತಾ ಥೋರತ್, ಸಂಘಟನೆಯ ಪ್ರಮುಖರಾದ ಕೆ ಸುಂದರ್ ಬಾಬು, ಧನುಶ್ರೀ, ತಾಲ್ಲೂಕು ಅದ್ಯಕ್ಷರು, ಜಿ ಪದಾಧಿಕಾರಿಗಳು ಸೇರಿದಂತೆ ಮೊದಲಾದವರಿದ್ದರು.

