ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸ್ವತಃ ಅಂಬೇಡ್ಕರ್ ಬಂದು ಹೇಳಿದರೂ ಸಂವಿಧಾನ ಬದಲಾಗಲ್ಲ: ಈಶ್ವರಪ್ಪ

Share Below Link

ಶಿವಮೊಗ್ಗ: ಸ್ವತಃ ಅಂಬೇಡ್ಕರ್ ಬಂದು ಹೇಳಿದರೂ ಸಂವಿಧಾನ ಬದಲು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಯವರೇ ಸ್ಪಷ್ಟನೆ ನೀಡಿದ ಮೇಲೂ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಈ ವಿಚಾರವನ್ನೇ ಇಟ್ಟುಕೊಂಡು ಅನಗತ್ಯ ಗೊಂದಲ ಸೃಷ್ಟಿಸುತ್ತಿzರೆ ಎಂದು ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ಆರ್‌ಎಸ್‌ಎಸ್ ಹೆಸರನ್ನು ಕೂಡ ಅನಗತ್ಯವಾಗಿ ಎಳೆದು ತರುತ್ತಿzರೆ. ಆರ್ ಎಸ್ ಎಸ್ ಎಂದೂ ಸಂವಿಧಾನದ ವಿಚಾರದಲ್ಲಿ ಈ ರೀತಿಯ ಅಭಿಪ್ರಾಯ ಹೇಳಿಲ್ಲ. ಕೇಂದ್ರ ಸರ್ಕಾರ ಕೂಡ ಹೇಳಿಲ್ಲ. ಸುಳ್ಳು ಸುದ್ದಿಯನ್ನೇ ಹತ್ತಾರು ಬಾರಿ ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುವ ಯತ್ನ ನಡೆಸಲಾಗುತ್ತಿದೆ ಎಂದು ಟೀಕಿಸಿದರು.
ಚುನಾವಣಾ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕುರಿತು ಮಾತನಾಡಿದರೆ ಲಾಭ ಮಾಡಿಕೊಳ್ಳಬಹುದು ಎಂದು ಇವರು ಭಾವಿಸಿದಂತಿದೆ. ಆದರೆ ನಿಜಕ್ಕೂ ಇವರಿಗೆ ಆರ್ ಎಸ್ ಎಸ್ ಕುರಿತ ಮಾತಿನಿಂದ ನಷ್ಟ ಅನುಭವಿಸುತ್ತಾರೆ ಎಂದು ಭವಿಷ್ಯ ನುಡಿದರು.
ದೇಶದ ಜನ ಈಗಾಗಲೇ ಆರ್‌ಎಸ್‌ಎಸ್ ಅನ್ನು ಒಪ್ಪಿಕೊಂಡಿ zರೆ. ಸಂವಿಧಾನ ವಿಚಾರದಲ್ಲಿ ಪ್ರಧಾನಿ ಮೋದಿಯವರೇ ಹೇಳಿದ ಮೇಲೆ ಇನ್ನು ಈ ವಿಚಾರವನ್ನು ರಾಜಕೀಯಕ್ಕೆ ಎಳೆ ತರಬಾರದು ಎಂದರು.