ಜಿಲ್ಲಾ ಸುದ್ದಿತಾಜಾ ಸುದ್ದಿ

ಶೀಘ್ರವೇ ವೀರಭದ್ರೇಶ್ವರ ದೇವರ ದರ್ಶನ ಭಾಗ್ಯ ದೊರೆಯುವಂತಾಗಲಿ: ಹಿರೇಕಲ್ಮಠ ಶ್ರೀಗಳು

Share Below Link

ಹೊನ್ನಾಳಿ: ಪಟ್ಟಣದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾ ಣವಾಗುತ್ತಿರುವ ವೀರಭದ್ರೇಶ್ವರ ದೇವಸ್ಥಾನದ ಕಟ್ಟಡವನ್ನು ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಶ್ರೀಗಳು ದೇವಸ್ಥಾನದ ಸಮಿತಿಯವರು ಸುಂದರವಾದ ಶಿಲೆಯ ಕಲ್ಲಿನಿಂದ ಪೇಟೆ ವೀರಭದ್ರೇಶ್ವರ ಸ್ವಾಮೀಯ ದೇವಸ್ಥಾನವು ಅತ್ಯಂತ ಶೀಘ್ರವಾಗಿ ನಡೆಯುತ್ತಿದ್ದು, ದೇವಸ್ಥಾನ ಕಟ್ಟುವ ಕಾರ್ಯ ಪೂರ್ಣಗೊಳ್ಳುತ್ತಿದ್ದು, ಇಲ್ಲಿನ ಭಕ್ತರ ಸಹಕಾರದಿಂದ ದೇವರ ದರ್ಶನ ಭಾಗ್ಯ ದೊರೆಯಲಿ ಎಂದು ಹಾರೈಸಿದರು.
ಇಲ್ಲಿನ ಆಸ್ತಿಕ ಸದ್ಭಕ್ತರಿಗೆ ಸಂತೋಷ, ಶಾಂತ, ನೆಮ್ಮದಿಗೆ ಕಾರಣವಾಗಲಿದೆ. ಶಿಲಾ ಕಟ್ಟಡವು ಸುಂದರವಾಗಿ ನಿರ್ಮಾಣವಾಗು ತ್ತಿದ್ದು ಬರುವ ಕಾರ್ತಿಕ ಮಾಸದಲ್ಲಿ ಉದ್ಘಾಟನೆಗೆ ಸಿದ್ದವಾಗಲಿದೆ ಎಂದರು.
ಪಟ್ಟಣಶೆಟ್ಟಿ ಪರಮೇಶ ಮಾತನಾಡಿ, ತುಮಕೂರು ಶಿರಾ ಕಡೆಯ ಕಲ್ಲನ್ನು ತರೆಸಲಾಗಿದ್ದು, ಕಾರ್ಕಳ ಶಿಲ್ಪಿಯವರಿಂದ ಸುಂದರವಾಗಿ ನಿರ್ಮಾಣವಾಗು ತ್ತಿದ್ದು, ಸುಮಾರು ೧ ಕೋಟಿ ರೂ ಅಂದಾಜು ವೆಚ್ಚದಲ್ಲಿ ಕಟ್ಟಡವು ನಿರ್ಮಾಣವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ದೇವಸ್ತಾನದ ಸಮಿತಿಯ ಪದಾಧಿಕಾರಿಗಳು, ಸಮಾಜದ ಮುಖಂಡ ರಾದ ಕುಂಬಾರ ಮುರುಗೇಂದ್ರಣ್ಣ, ಸತೀಶ್, ರುದ್ರಣ್ಣ, ಪಟ್ಟಣಶೆಟ್ಟಿ ವಿಜಯ್, ಕುಂಬಾರ ಬಸಣ್ಣ, ಹೆಚ್‌ಆರ್ ಸತೀಶ್ ಇದ್ದರು.