ಮಹಿಳೆ ಎ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾಳೆ : ಕವಿತಾ
ಶಿವಮೊಗ್ಗ: ಮಹಿಳೆ ಎ ಕ್ಷೇತ್ರದಲ್ಲೂ ಮುಂ ದುವರಿಯುತ್ತಿದ್ದು, ಆರ್ಥಿಕವಾ ಗಿಯೂ ಅವಳು ಸಶಕ್ತಳಾಗುವೆಡೆ ನಿಗಾ ವಹಿಸಬೇಕೆಂದು ಶಿವಮೆಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಹಿಳೆ ಯರಿಗೆ ಕಿವಿಮಾತು ಹೇಳಿzರೆ.
ಭಾನುವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಿಂಗುಲಾಂಬಿಕಾ ಮಹಿಳಾ ವಿಕಾಸ ವೇದಿಕೆಯ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಮಹಿಳೆ ಎ ಕೆಲಸಗ ಳನ್ನು ನಿಭಾಯಿಸಲು ಸಶಕ್ತಳಾಗಿ zಳೆ. ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ವಿವಿಧ ಸ್ತರಗಳಲ್ಲಿ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾ ಯಿಸುತ್ತಿzಳೆ. ಆದರೆ, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತ ದ ಸಂಸ್ಕೃತಿಯನ್ನು ಉಳಿಸಿ ಬೆಳೆಸ ಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸೋಶಿ ಯಲ್ ಮೀಡಿಯಾ ಪ್ರಭಾವಕ್ಕೆ ಒಳಗಾಗಿ ಹಲವಾರು ಮಹಿಳೆ ಯರು, ತೊಂದರೆಗೆ ಸಿಲುಕುತ್ತಿ zರೆ. ಹಲವಾರು ಅವಘಢಗಳು ಸಂಭವಿಸುತ್ತಿವೆ. ನಾವು ಬಹಳಷ ಎಚ್ಚರಿಕೆಯಿದ ಇರಬೇಕು ನಮ್ಮ ಸಂಸ್ಕೃತಿ ಉಳಿಸುವೆಡೆ ಎಚ್ಚರಿಕೆ ವಹಿಸಬೇಕೆಂದು ಆಶಯ ವ್ಯಕ್ತ ಪಡಿಸಿದರು. ಮದುವೆಗಿಂತ ಮೊದಲು ಮಹಿಳೆಯರು ತಂದೆ, ತಾಯಿ ಕುಟುಂಬ ನೋಡಿಕೊಳ್ಳು ವುದು, ಮದುವೆಯಾದ ಬಳಿಕ ಪತಿ, ಪತಿ ಕುಟುಂಬ, ಮಕ್ಕಳು ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಇದರಿಂದಾಗಿ ಎಷ ಮಹಿಳೆಯರು ತಮ್ಮ ಬಗ್ಗೆ ತಾವು ಯೋಚನೆ ಮಾಡುವುದಿಲ್ಲ. ಆರೊ ಗ್ಯದ ಕಡೆ ನಿಗಾ ವಹಿಸುವುದಿಲ್ಲ. ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಯೋಗ ಧ್ಯಾನಕ್ಕೆ ನಮಗೆ ನಾವು ಸಮಯ ನೀಡಿಕೊಳ್ಳಬೇ ಕೆಂದು ಕಿವಿಮಾತು ಹೇಳಿದರು.
ಇನ್ನು ನಗರ ವ್ಯಾಪ್ತಿಯ ಮಹಿಳೆ ಯರಿಗೆ ಆರ್ಥಿಕವಾಗಿ ಸಬಲರಾ ಗಲು, ಸ್ವಂತ ವ್ಯವಹಾರ ಆರಂಭಿ ಸಲು, ಪಾಲಿಕೆಯಿಂದ ಯೋಜನೆ ಮೂಲಕ ಹಣ ಸಹಾಯ ಮಾಡು ತ್ತೇವೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು
ಈ ವೇಳೆ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೮೫ಕ್ಕಿಂತ ಹೆಚ್ಚಿನ ಅಂಕ ಪಡೆದ ಭಾವಸಾರ ಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾ ಯಿತು.
ವೇದಿಕೆಯಲ್ಲಿ ಹಿಂಗು ಲಾಂಬಿಕಾ ಮಹಿಳಾ ವೇದಿಕೆ ಅಧ್ಯಕ್ಷೆ ಕವಿತಾ ಫಟ್ಕೆ, ೨೦೨೫- ೨೬ ಸಾಲಿನ ಅಧ್ಯಕ್ಷೆ ಅನಿಷ ಸತೀಶ್, ಕಾರ್ಯದರ್ಶಿ ವಿಭಾ ತೇಲ್ಕರ್, ಸಹ ಕಾರ್ಯದರ್ಶಿ ಅರ್ಚನಾ ನಾಜ್ರೆ, ಖಜಂಚಿ ಸುಮಾ ಶೇಖರ್, ನಂದಾ ಜಗದೀಶ್ ಸೇರಿದಂತೆ ಇತರರಿದ್ದರು.