ಜಿಲ್ಲಾ ಸುದ್ದಿತಾಜಾ ಸುದ್ದಿ

ಜೆಸಿಐ ಚಿರಂತನ ಅಧ್ಯಕ್ಷರಾಗಿ ನಾಗರಾಜ್ ಅಂಗಡಿ…

Share Below Link

ಶಿವಮೊಗ್ಗ: ಜೆಸಿಐ ಶಿವಮೊಗ್ಗ ಚಿರಂತನ ಸಂಸ್ಥೆಯ ೩ನೇ ಪದ ಗ್ರಹಣ ಸಮಾರಂಭದಲ್ಲಿ ೨೦೨೪ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ನಾಗರಾಜ್ ಎಸ್.ಅಂಗಡಿ ಹಾಗೂ ಕಾರ್ಯದರ್ಶಿಯಾಗಿ ರುದ್ರೇಶ ಕೋರಿ ಅಧಿಕಾರ ಸ್ವೀಕರಿಸಿದರು.
ನಗರದ ಶುಭಂ ಹೊಟೇಲ್ ನಲ್ಲಿ ಆಯೋಜಿಸಿದ್ದ ಜೆಸಿಐ ಶಿವಮೊಗ್ಗ ಚಿರಂತನ ಸಂಸ್ಥೆಯ ೩ನೇ ಪದಗ್ರಹಣ ಸ್ವೀಕಾರ ಸಮಾರಂಭ ಅತ್ಯಂತ ಯಶಸ್ವಿಯಾಗಿ ಜರುಗಿತು. ಟಿಎಂಎಇಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಗುಂಡಯ್ಯ ಹಿರೇಮಠ್ ಅತಿಥಿಯಾಗಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ, ಜೆಸಿಐ ಸೆನೆಟರ್ ಡಾ. ಎಸ್.ವಿ.ಶಾಸಿ ಉದ್ಘಾಟಿಸಿದರು. ಸಹಕಾರಿ ದುರೀಣ ನಾಗರಾಜ್ ಹರತಾಳು, ನಿಕಟಪೂರ್ವ ವಲಯ ಅಧ್ಯಕ್ಷ ಅನುಷ್ ಗೌಡ ಅವರು ನೂತನ ಅಧ್ಯಕ್ಷರಿಗೆ ಶುಭಕೋರಿ ದರು. ವಲಯ ಅಧ್ಯಕ್ಷ ಚನ್ನವಿರೇಶ್ ಹಾವಣಗಿ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಽಸಿದರು.
ವಲಯ ಉಪಾಧ್ಯಕ್ಷ ಸಂತೋಷ್ ಸೋಗಿ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಜೆಸಿಐ ಶಿವಮೊಗ್ಗ ಚಿರಂತನ ೨೦೨೩ ಅಧ್ಯಕ್ಷೆ ಡಾ. ಎಸ್.ಬಿ.ಭಾಗ್ಯಲಕ್ಷ್ಮೀ ಆಚಾರ್ ಅಧ್ಯಕ್ಷತೆ ವಹಿಸಿ ಮಾತನಾ ಡಿದರು. ಸ್ಥಾಪಕ ಅಧ್ಯಕ್ಷೆ ಶಾಂತಾ ಶೆಟ್ಟಿ ಉಪಸ್ಥಿತರಿದ್ದರು.
ಜೆಸಿಐ ಶಿವಮೊಗ್ಗ ಚಿರಂತನ ಸಂಸ್ಥೆಯ ಅಧ್ಯಕ್ಷರಾಗಿ ಡಾ. ನಾಗ ರಾಜ ಎಸ್.ಅಂಗಡಿ, ಕಾರ್ಯ ದರ್ಶಿಯಾಗಿ ರುದ್ರೇಶ್ ಕೋರಿ, ಸಹ ಕಾರ್ಯದರ್ಶಿಯಾಗಿ ನಿಶಾಂತ್, ತ್ರಿವೇಣಿ, ಉಪಾಧ್ಯ ಕ್ಷರಾಗಿ ಡಾ. ಯತೀಶ್, ಡಾ. ವಾಸುದೇವ್, ಚಂದನ್ ಎನ್ ಹೊಳ್ಳ, ಡಾ. ಎ ಬಿ ಕೃಷ್ಣಮೂರ್ತಿ ಆಚಾರ್, ಯತಿರಾಜ್, ಖಜಂಚಿ ಯಾಗಿ ಪೃಥ್ವಿ, ನಾಗರಾಜ್, ನಿರ್ದೆ ಶಕರಾಗಿ ಮಮತಾ, ಉಮಾಪತಿ, ಡಾ. ಪದ್ಮಿನಿ, ಚಂದನ ಚಾರ್, ನಾಗರಾಜ್ ಪೂಜರ್, ಮಂಜು ನಾಥ್, ಉಮೇಶ್, ಮಹಿಳಾ ಜೆಸಿ ಅಧ್ಯಕ್ಷರಾಗಿ ಜ್ಯೋತಿ ಉಮೇಶ್, ಜೂನಿಯರ್ ಜೆಸಿ ಅಧ್ಯಕ್ಷರಾಗಿ ಅಭಿe ಹಿರೇಮಠ ಅಧಿಕಾರ ಸ್ವೀಕರಿಸಿದರು.